Benchmarks
View scores and output across OCR models spanning many document categories.
Want to run these evals on your own documents?
Talk to Sales
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ : ಕೇಂದ್ರ ಕಛೇರಿ : ವರಿಷ್ಠತಾ ಶಾಖೆ : ಬೆಂಗಳೂರು
ಸಂಖ್ಯೆ/ಕರಾಸಾ/ಕೇಕ/ವಶಾ/ಸಾಮಾನ್ಯ/ 524 /2019-2020
ದಿನಾಂಕ : 25/02/2020
ಅಧಿಸೂಚನೆ
ಉಲ್ಲೇಖ : ಅಧಿಸೂಚನೆ ಸಂಖ್ಯೆ/ಕರಾಸಾ/ಕೇಕ/ವಶಾ/ಆ/429/19-20, ದಿನಾಂಕ:12/11/2019 ರ ಅನ್ವಯ ಪ್ರಕಟಿಸಿರುವ ದಿನಾಂಕ:27/04/1978 ರಿಂದ
ಈವರೆಗಿನ ಅವಧಿಯ ಕಿರಿಯ ಶೀಘ್ರಲಿಪಿಗಾರ (ದರ್ಜೆ-III) (ರಾಜ್ಯ ಮಟ್ಟದ ಕ್ರೋಢೀಕೃತ) ಪರಿಷ್ಕೃತ ಅಂತಿಮ ಜೇಷ್ಠತಾ ಪಟ್ಟಿ.
*****
ಭಾರತ ಸಂವಿಧಾನದ ಅನುಚ್ಛೇದ 371(ಜೆ) ರ ಅನ್ವಯ ಹೈದರಾಬಾದ್-ಕರ್ನಾಟಕ ಪ್ರದೇಶದ ಮೀಸಲಾತಿಗೆ ಒಳಪಡುವ ಈ.ಕ.ರ.ಸಾ.ಸಂಸ್ಥೆಯನ್ನು ಆಯ್ಕೆ
ಮಾಡಿಕೊಂಡು ಸ್ಥಳೀಯ ವೃಂದ ಸೇರ್ಪಡೆ ಹಾಗೂ ಶಾಶ್ವತವಾಗಿ ಮೀಸಲಾತಿ ಬಯಸುವ ಬಗ್ಗೆ ಇಚ್ಛಾ ಪತ್ರ ಸಲ್ಲಿಸಿರುವ ಉದ್ಯೋಗಿಗಳಿಗೆ
ಸಂಬಂಧಿಸಿದಂತೆ ಶ್ರೀ.ಬಿ.ಕೆ.ಪವಿತ್ರ ಪ್ರಕರಣದನ್ವಯ ವಿಭಾಗಗಳಲ್ಲಿ ಪರಿಷ್ಕರಿಸಿ ಪ್ರಕಟಿಸಿರುವ ಜೇಷ್ಠತಾ ಪಟ್ಟಿಗಳನ್ನು ಪರಿಗಣಿಸಿ, ಉಲ್ಲೇಖ-1 ರ ಜೇಷ್ಠತಾ ಪಟ್ಟಿಯಲ್ಲಿನ
ಜೇಷ್ಠತಾ ಕ್ರಮಾಂಕದನ್ವಯ 371(ಜೆ) ಮೀಸಲಾತಿಯ ಈ.ಕ.ರ.ಸಾ.ಸಂಸ್ಥೆಯ
ಕಿರಿಯ ಶೀಘ್ರಲಿಪಿಗಾರ (ದರ್ಜೆ-III)
ವೃಂದದ ಕ್ರೋಢೀಕೃತ ಜೇಷ್ಠತಾ
ಪಟ್ಟಿಯನ್ನು ಈ ಮೂಲಕ ಪ್ರಕಟಿಸಲಾಗಿರುತ್ತದೆ.
ಸದರಿ ಪಟ್ಟಿಯನ್ನು ನಿಗಮದ ಅಧಿಕೃತ ವೆಬ್ಸೈಟ್ (
www.ksrtc.in/pages// seniority-list
) ನಲ್ಲಿ ಪ್ರಕಟಿಸಲಾಗಿದ್ದು, ಈ ಪಟ್ಟಿಯಲ್ಲಿ ನಮೂದಿಸಿರುವ
ಸೇವಾ ವಿವರ, ಜೇಷ್ಠತಾ ಸ್ಥಾನಸ್ಥಿತಿ, ಇತ್ಯಾದಿ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ, ಆಕ್ಷೇಪಣೆಗಳನ್ನು ಸಮರ್ಥಿಸುವಂಥಹ ದೃಢೀಕೃತ ದಾಖಲೆಗಳೊಂದಿಗೆ ತಮ್ಮ
ಮೇಲಾಧಿಕಾರಿಗಳ ಮುಖಾಂತರ ಈ ಪಟ್ಟಿ ಪ್ರಕಟಗೊಂಡ ದಿನಾಂಕದಿಂದ 15 ದಿನಗಳ ಒಳಗಾಗಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು(ಸಿಬ್ಬಂದಿ), ಕ.ರಾ.ರ.ಸಾ.ನಿಗಮ,
ಕೇಂದ್ರ ಕಛೇರಿ, ಬೆಂಗಳೂರು ರವರಿಗೆ ಸಲ್ಲಿಸುವಂತೆ ಹಾಗೂ ನಿಗದಿತ ಅವಧಿಯ ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲವೆಂದು ಈ ಮೂಲಕ
ತಿಳಿಯಪಡಿಸಲಾಗಿದೆ.
ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು(ಸಿಬ್ಬಂದಿ)
ಗೆ,
ಸಂಬಂಧಪಟ್ಟ ಉದ್ಯೋಗಿಗಳಿಗೆ.