Benchmarks
View scores and output across OCR models spanning many document categories.
Want to run these evals on your own documents?
Talk to Salesವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ
ಜ್ಞಾನ ಸಾಗರ ಆವರಣ, ವಿನಾಯಕ ನಗರ, ಕಂಟೋನ್ಮೆಂಟ್, ಬಳ್ಳಾರಿ-583 105
ಕುಲಸಚಿವರು
ದೂರವಾಣಿ: 08392-242873/ಫ್ಯಾಕ್ಸ್: 08392- 242097
ಸಂಖ್ಯೆ: ವಿ.ಶ್ರೀ.ಕೃ.ವಿ.ವಿ/ಆದೇಶ/2017-18/65
ದಿನಾಂಕ: 02.05.2017
ಅಧಿಸೂಚನೆ:
ವಿಷಯ : ಸಿ.ಎ.ಎಸ್ ಬಡ್ತಿ ಪ್ರಕ್ರಿಯೆ ಕುರಿತು.
ಉಲ್ಲೇಖ : ಮಾನ್ಯ ಕುಲಪತಿಗಳ ನಿರ್ದೇಶನ ದಿನಾಂಕ : 27.04.2017.
ಮಾನ್ಯ ಕುಲಪತಿಗಳ ನಿರ್ದೇಶನದ ಮೇರೆಗೆ, ಈ ಮೂಲಕ ಎಲ್ಲಾ ಬೋಧಕ ಸಿಬ್ಬಂದಿಗಳ ಗಮನಕ್ಕೆ ತರಬಯಸುವುದೇನೆಂದರೆ, ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಗಳಿಗೆ, ಸಿ.ಎ.ಎಸ್. ಅಡಿಯಲ್ಲಿ ಬಡ್ತಿ ಪ್ರಕ್ರಿಯೆ ಆರಂಭಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು, ದಿನಾಂಕ: 10.05.2017ರ ಒಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಯನ್ನು ವಿಶ್ವವಿದ್ಯಾಲಯದ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
ಕುಲಸಚಿವರು
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ
ಬಳ್ಳಾರಿ.
ಪ್ರತಿಗಳು:
- ಮಾನ್ಯ ಕುಲಪತಿಗಳ ಆಪ್ತ ಕಾರ್ಯದರ್ಶಿ, ವಿ.ಶ್ರೀ.ಕೃ.ವಿ.ವಿ, ಬಳ್ಳಾರಿ.
- ಎಲ್ಲಾ ವಿಭಾಗ/ಘಟಕಗಳ ಮುಖ್ಯಸ್ಥರು/ ಸಂಯೋಜಕರು/ವಿ.ಶ್ರೀ.ಕೃ.ವಿ.ವಿ, ಬಳ್ಳಾರಿ- ತಮ್ಮ ವಿಭಾಗ/ಘಟಕಗಳ ಸಿಬ್ಬಂದಿಗಳ ಗಮನಕ್ಕೆ ತರಲು ಸೂಚಿಸಿದೆ.
- ನಿರ್ದೇಶಕರು, ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿ,
- ವಿಶೇಷಾಧಿಕಾರಿಗಳು, ಸ್ನಾತಕೋತ್ತರ ಕೇಂದ್ರ, ಕೊಪ್ಪಳ.
- ವಿಶೇಷಾಧಿಕಾರಿಗಳು, ಸ್ನಾತಕೋತ್ತರ ಕೇಂದ್ರ, ಯಲಬುರ್ಗಾ.
- ಕಛೇರಿ ಪ್ರತಿ.