Talk to Sales

Benchmarks

View scores and output across OCR models spanning many document categories.

Want to run these evals on your own documents?

Talk to Sales
Page 1
  1. ಓದಲಾಗಿದೆ (1)ರ ಸರ್ಕಾರಿ ಆದೇಶದಲ್ಲಿ ಹಾಗೂ ಓದಲಾಗಿದೆ (2)ರ ಸುತ್ತೋಲೆಯಲ್ಲಿ ಹೊರಡಿಸಲಾದ ಯೋಜನಾ ಮಾರ್ಗಸೂಚಿ ಪ್ರತಿ ಗ್ರಾಮಕ್ಕೆ ಸಂಬಂಧಿಸಿದಂತೆ ಸಮಗ್ರ ಅಭಿವೃದ್ಧಿ ಯೋಜನೆಯನ್ನು ರೂಪಿಸಿ ಅನುಮೋದನೆ ನೀಡಿ ಕಾರ್ಯಗತಗೊಳಿಸುವುದು.
  2. ಸರ್ಕಾರಿ ಸುತ್ತೋಲೆಯೊಂದಿಗೆ ಲಗತ್ತಿಸಲಾದ ಅನುಬಂಧ-1ರಲ್ಲಿ ಸೂಚಿಸಿದ ತಾಲ್ಲೂಕುವಾರು ನಿಗದಿಪಡಿಸಿರುವ ಅನುದಾನದ ಮಿತಿಯೊಳಗೆ ಕಾರ್ಯಕ್ರಮವನ್ನು ಕೈಗೊಳ್ಳುವುದು.
  3. ಗ್ರಾಮವಾರು ಅನುದಾನವನ್ನು ನಿಗದಿಪಡಿಸುವಾಗ ಗ್ರಾಮದ ಜನಸಂಖ್ಯೆಗನುಗುಣವಾಗಿ ತಲಾನುದಾನ ನಿಯಮಕ್ಕೆ ತಕ್ಕಂತೆ ನಿಗದಿಪಡಿಸಿಕೊಳ್ಳತಕ್ಕದ್ದು.
  4. ಸುತ್ತೋಲೆಯೊಂದಿಗೆ ಲಗತ್ತಿಸಲಾದ ಅನುಬಂಧ-2ರ ವೇಳಾಪಟ್ಟಿಗನುಗುಣವಾಗಿ ಕಾರ್ಯಾನುಷ್ಠಾನ ಮಾಡುವುದು.
  5. ಆಯ್ಕೆಯಾದ ಗ್ರಾಮವು ಈ ಯೋಜನೆಯ ಹಿಂದಿನ ಹಂತದಲ್ಲಿ ಆಯ್ಕೆಯಾಗಿಲ್ಲದಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

(ಬೂಪನಹಳ್ಳಿ ನಾಗರಾಜ್)

ನಿರ್ದೇಶಕರು(ಸು.ನಿ.) ಹಾಗೂ

ಸರ್ಕಾರದ ಪದನಿಮಿತ್ತ ಉಪಕಾರ್ಯದರ್ಶಿ,
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ಪ್ರತಿಯನ್ನು:

  1. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಉಡುಪಿ.
  2. ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು, ಉಡುಪಿ.
  3. ಮಾನ್ಯ ಮುಖ್ಯ ಮಂತ್ರಿಯವರ ಆಪ್ತ ಕಾರ್ಯದರ್ಶಿಗಳು, ವಿಧಾನಸೌಧ, ಬೆಂಗಳೂರು.
  4. ಮಾನ್ಯ ಉಪ ಮುಖ್ಯ ಮಂತ್ರಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಸಚಿವರ ಆಪ್ತ ಕಾರ್ಯದರ್ಶಿಗಳು, ವಿಧಾನಸೌಧ, ಬೆಂಗಳೂರು.
  5. ಮುಖ್ಯ ಲೆಕ್ಕಾಧಿಕಾರಿ ಮತ್ತು ಮುಖ್ಯ ಯೋಜನಾಧಿಕಾರಿ, ಜಿಲ್ಲಾ ಪಂಚಾಯತ್, ಉಡುಪಿ.
  6. ಸಂಕಲನಕಾರರು, ರಾಜ್ಯಪತ್ರ, ಬೆಂಗಳೂರು.
  7. ಮಹಾಲೇಖಪಾಲರು, ಬೆಂಗಳೂರು.
  8. ವಿಶೇಷಾಧಿಕಾರಿ, ಗಣಕ ಕೋಶ, ಗ್ರಾ.ಅ.ಪ.ಇಲಾಖೆ ಇವರಿಗೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು.
  9. ಸಂಪಾದಕರು, ಕರ್ನಾಟಕ ವಿಕಾಸ, ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲು.
  10. ಹೆಚ್ಚುವರಿ.